ADVERTISEMENT

ಬ್ರಹ್ಮರಥಕ್ಕೆ ಕ್ರೇನ್‌ ಮೂಲಕ ಚಕ್ರ ಜೋಡಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:55 IST
Last Updated 12 ಜನವರಿ 2017, 10:55 IST

ಕಕ್ಕೇರಾ: ಜ.13ರಿಂದ 23ರವರೆಗೆ ನಡೆ ಯುವ ಪಟ್ಟಣದ ಸೌರಾಷ್ಟ್ರ ಅಧಿಪತಿ ಸೋಮ ನಾಥ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಜ.15ರಂದು ರಥೋತ್ಸವ ನಡೆಯಲಿದೆ. 65 ಅಡಿ ಎತ್ತರದ ನೂತನ ಬ್ರಹ್ಮರಥಕ್ಕೆ ಬುಧ ವಾರ ಕ್ರೇನ್ ಮೂಲಕ ಚಕ್ರಗಳನ್ನು ಅಳವಡಿಸಲಾಯಿತು.

ಚಕ್ರಗಳಿಗೆ ಪೂಜ್ಯ ನಂದಣ್ಣಪ್ಪ ಪೂಜಾರಿ ಪೂಜೆ ಸಲ್ಲಿಸಿ ರಥಕ್ಕೆ ಚಕ್ರಗಳನ್ನು ಜೋಡಿಸಲು ಚಾಲನೆ ನೀಡಿದರು. ಹಣಮಂತರಾಯಗೌಡ ಜಾಗೀರದಾರ, ವೆಂಕಟೇಶನಾಯಕಗೌಡ ಜಾಗೀರದಾರ, ಕೋಠಾ ನರಸಿಂಹನಾಯಕ, ಸೋಮನಿಂಗಪ್ಪ ದೇಸಾಯಿ, ರಾಮಯ್ಯಶೆಟ್ಟಿ,  ಪುರಸಭೆ ಅಧ್ಯಕ್ಷ ರಾಜು ಹವಾಲ್ದಾರ, ಗುಂಡಪ್ಪ ಸೊಲ್ಲಾಪುರ, ಪರಮಣ್ಣ ಪೂಜಾರಿ,ಪರಮಣ್ಣ ಗುತ್ತೇದಾರ, ಬಸವರಾಜ ಆರೆಶಂಕರ, ವೀರಸಂಗಪ್ಪ ಹಾಗೂ ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.