ADVERTISEMENT

‘ನೈಸ್’ನಲ್ಲಿ ‘ಐರಾವತ’ದ ಬೆನ್ನಟ್ಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2015, 19:30 IST
Last Updated 28 ಮೇ 2015, 19:30 IST

ಸಂದೇಶ್ ನಾಗರಾಜು ಅವರು ನಿರ್ಮಿಸುತ್ತಿರುವ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ಐರಾವತ’ ಚಿತ್ರಕ್ಕೆ ಚೇಸಿಂಗ್ ಹಾಗೂ ಸಾಹಸ ಸನ್ನಿವೇಶಗಳ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನೈಸ್ ರಸ್ತೆಯಲ್ಲಿ ಆರು ದಿನಗಳ ಕಾಲ ನಡೆದ ಈ ಚಿತ್ರೀಕರಣದಲ್ಲಿ ದರ್ಶನ್ ಹಾಗೂ ಸಾಹಸ ಕಲಾವಿದರು ಭಾಗವಹಿಸಿದ್ದರು. ಈ ದೃಶ್ಯಗಳನ್ನು ಸಂಯೋಜಿಸಿದವರು ಸಾಹಸ ನಿರ್ದೇಶಕ ರಾಂಲಕ್ಷ್ಮಣ್.

ಎ.ಪಿ.ಅರ್ಜುನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಐರಾವತ’ದ ತಾರಾಗಣದಲ್ಲಿ ಊರ್ವಶಿ ರೌತೆಲ, ಪ್ರಕಾಶ್ ರೈ, ಸಾಧುಕೋಕಿಲ, ಅವಿನಾಶ್, ಅಶೋಕ್ ಮುಂತಾದವರಿದ್ದಾರೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶೇಖರ್‌ಚಂದ್ರ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ, ಕಲೈ, ಗಣೇಶ್ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.