ADVERTISEMENT

ದರ್ಶನ್ ಮುಂದಿನ ಚಿತ್ರಕ್ಕೆ ಪ್ರೇಮ್‌ ನಿರ್ದೇಶನ: ಖಳನಾಯಕನಾಗಿ ನಟ ಸಂಜಯ್‌ ದತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2024, 7:45 IST
Last Updated 8 ಫೆಬ್ರುವರಿ 2024, 7:45 IST
   

‘ಕಾಟೇರಾ’ ಯಶಸ್ಸಿನಲ್ಲಿ ತೇಲಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಮುಂದಿನ ಚಿತ್ರಕ್ಕೆ ಜೋಗಿ ಪ್ರೇಮ್‌ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಚಿತ್ರದ ಜವಾಬ್ದಾರಿಯನ್ನು ಕೆವಿಎನ್ ನಿರ್ಮಾಣ ಸಂಸ್ಥೆ ವಹಿಸಿಕೊಳ್ಳಲಿದ್ದು, ಖಳನಾಯಕನಾಗಿ ಬಾಲಿವುಡ್‌ ನಟ ಸಂಜಯ್‌ ದತ್ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಮ್ ಆಪ್ತ ಮೂಲಗಳು ತಿಳಿಸಿವೆ.

ಇದಕ್ಕೆ ಪೂರಕವಾಗಿ ದರ್ಶನ್, ಸಂಜಯ್ ದತ್‌, ಕೆವಿಎನ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಕೆ. ವೆಂಕಟ್‌ ನಾರಾಯಣ್‌ ಅವರ ಜೊತೆ ನಿಂತಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೇಮ್‌ ಹಂಚಿಕೊಂಡಿದ್ದಾರೆ. .

ADVERTISEMENT

‘KD’ ಚಿತ್ರದ ನಂತರ ಮತ್ತೆ ಕೆವಿಎನ್ ಜೊತೆ ಪ್ರೇಮ್‌ ಕೈಜೋಡಿಸಿದ್ದಾರೆ. ‘KD’ ಚಿತ್ರದಲ್ಲಿ ನಟ ಧ್ರುವ ಸರ್ಜಾ ಅಭಿನಯಿಸಿದ್ದಾರೆ.

ಮೆಜಸ್ಟಿಕ್, ಕರಿಯಾದಂತಹ ಹಿಟ್‌ ಚಿತ್ರಗಳನ್ನು ನೀಡಿರುವ ದರ್ಶನ್–ಪ್ರೇಮ್ ಜೋಡಿಯ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.