ಡಾ.ರಾಜ್ ಕುಮಾರ್ ಜಯಂತಿ ಪ್ರಯುಕ್ತ ಕಲರ್ಸ್ ವಾಹಿನಿಯು ‘ಮಜಾ ಟಾಕೀಸ್’ ವಿಶೇಷವಾದ ಸಂಚಿಕೆಯನ್ನು ರೂಪಿಸಿದೆ. ಮಜಾ ಟಾಕೀಸ್ ತಂಡ ರಾಜ್ಕುಮಾರ್ ಸಮಾಧಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಹಾಡುಗಾರ ಅಜಯ್ ವಾರಿಯರ್ ರಾಜ್ಕುಮಾರ್ ಅವರ ಗೀತೆಗಳನ್ನು ಹಾಡಲಿದ್ದಾರೆ. ಕುರಿ ಪ್ರತಾಪ್, ಅಪರ್ಣಾ, ಮಂಡ್ಯ ರಮೇಶ್ ಅವರು ರಾಜ್ಕುಮಾರ್ ಅವರ ಚಿತ್ರಗಳ ಪಾತ್ರಗಳನ್ನು ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ವಿಶೇಷ ಸಂಚಿಕೆಗೆ ಹೊನ್ನವಳ್ಳಿ ಕೃಷ್ಣ, ಬರಗೂರು ರಾಮಚಂದ್ರ, ಟಿ.ಎಸ್.ನಾಗಾಭರಣ ಆಗಮಿಸಲಿದ್ದಾರೆ.
ಡಾ.ರಾಜ್ ವಿಶೇಷ ಸಂಚಿಕೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಚೆಟ್ಟಿನಾಡು ಆಹಾರೋತ್ಸವ
ಇಂದಿರಾನಗರದ ಸೌತ್ ಇಂಡೀಸ್ ರೆಸ್ಟೊರೆಂಟ್ನಲ್ಲಿ ಏಪ್ರಿಲ್ 24 ರಿಂದ ‘ಐಯರ್ ಆನ್ ಫಯರ್’ ಹೆಸರಿನಲ್ಲಿ ಚೆಟ್ಟಿನಾಡು ಆಹಾರ ಉತ್ಸವ ಆಯೋಜಿಸಿದೆ.
ಆಹಾರ ಮೇಳದಲ್ಲಿ ಪೋಡಿ ಪನ್ನೀರ್, ಪಚ್ಚ ಪೈಯರ್ ಪೋಡಿ ಪನ್ನೀರ್, ಪನಿಯಾರಂ, ಪೋಡಿ ಇಡ್ಲಿ, ಕಾಂಜಿಪುರಂ ವಡಾ ಕರೀ, ಚೆಟ್ಟಿನಾಡ್ ಮಸಾಲ ಮುಂತಾದ ಖಾದ್ಯಗಳು ದೊರೆಯಲಿವೆ.
ವಿಳಾಸ: ಸೌತ್ಇಂಡೀಸ್, 100 ಅಡಿ ರಸ್ತೆ, 7ನೇ ಜಂಕ್ಷನ್, ಗಿರಿಯಾಸ್ ಮೇಲೆ, ಇಂದಿರಾನಗರ.
ಅವಧಿ: ಮಧ್ಯಾಹ್ನ 12 ರಿಂದ 3.30 ಮತ್ತು ರಾತ್ರಿ 7 ರಿಂದ 11.
ಬೆಲೆ: ₹450 ರಿಂದ ಪ್ರಾರಂಭ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.