ದೆಹಲಿ: ಒಂದೂವರೆ ವರ್ಷದ ಮಗಳು ಅಳು ನಿಲ್ಲಿಸಲಿಲ್ಲ ಎಂದು ಸಿಟ್ಟುಗೊಂಡ ಕುಡುಕ ತಂದೆಯೊಬ್ಬ ಮಗುವನ್ನು ಚರಂಡಿಗೆ ಎಸೆದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಜಾಮಿಯಾ ನಗರ ನಿವಾಸಿ ರಶೀದ್ ಜಮಾಲ್ ಎಂಬಾತ ಮಂಗಳವಾರ ಮನೆಗೆ ಬಂದಾಗ ಆತನ ಪುಟ್ಟ ಮಗು ನಿರಂತರವಾಗಿ ಅಳುತ್ತಿತ್ತು. ಕುಡಿದ ಅಮಲಿನಲ್ಲಿದ್ದ ಜಮಾಲ್ಗೆ ಮಗುವಿನ ಅಳು ಕಿರಿಕಿರಿಯನ್ನುಂಟು ಮಾಡಿದೆ.ಈ ವಿಷಯದಲ್ಲಿ ಹೆಂಡತಿ ಜತೆ ಜಗಳವಾಡಿದ ಜಮಾಲ್, ಮಗಳನ್ನೆತ್ತಿಕೊಂಡು ಮನೆಯಿಂದ ಹೊರಗೆ ನಡೆದಿದ್ದಾನೆ.
ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಜಮಾಲ್ ಪತ್ನಿ ಮೊಫಿದಾ ಬೇಗಂ ತನ್ನ ಮನೆಯವರಿಗೆ ಮತ್ತು ನೆರೆಮನೆಯವರಿಗೆ ತಿಳಿಸಿದ ನಂತರ ಮಗುವಿಗಾಗಿ ಹುಡುಕಾಟ ನಡೆಸಲಾಗಿತ್ತು.
ಹೀಗೆ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಶುಕ್ರವಾರ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚರಂಡಿ ಬಳಿ ಜಮಾಲ್ ಅಡ್ಡಾಡಿರುವುದನ್ನು ನೋಡಿದವರೂ ಇದ್ದಾರೆ. ಮೊಫಿದಾ ಅವರ ಆರೋಪದ ಮೇರೆಗೆ ಜಮಾಲ್ ಅವರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.