ADVERTISEMENT

ತಡೆ ತೆರವಿಗೆ ಎಡಿಟರ್ಸ್‌ ಗಿಲ್ಡ್‌ ಮನವಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 10:52 IST
Last Updated 6 ಮಾರ್ಚ್ 2015, 10:52 IST

ನವದೆಹಲಿ (ಪಿಟಿಐ): ನಿರ್ಭಯಾ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಕೇಂದ್ರ ಸರ್ಕಾರ ವಿಧಿಸಿರುವ ತಡೆ ತೆರವುಗೊಳಿಸುವಂತೆ ಭಾರತೀಯ ಸಂಪಾದಕರ ಸಂಘ (ಎಡಿಟರ್ಸ್‌ ಗಿಲ್ಡ್‌) ಮನವಿ ಮಾಡಿದೆ.

ಬಿಬಿಸಿ ವಾಹಿನಿಗೆ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ವಿಧಿಸಿರುವ ತಡೆಯನ್ನು ತೆರವುಗೊಳಿಸಬೇಕೆಂದು ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಸಾಕ್ಷ್ಯಚಿತ್ರವು ಹಲವು ಆಯಾಮಗಳನ್ನು ಒಳಗೊಂಡಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರ ಅನಿಸಿಕೆ ಹಾಗೂ ಅಪರಾಧಿಯ ಮನೋಭಾವ, ಘಟನೆ ಕುರಿತಂತೆ ವಕೀಲರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.