ADVERTISEMENT

ತಮಿಳು ಪಕ್ಷಗಳಿಂದ ರಸ್ತೆ, ರೈಲು ತಡೆ

ಮೇಕೆದಾಟು ಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 11:15 IST
Last Updated 24 ನವೆಂಬರ್ 2014, 11:15 IST

ನಾಗಪಟ್ಟಣಂ (ಪಿಟಿಐ): ಕರ್ನಾಟಕ ಕಾವೇರಿ ಕೊಳ್ಳದ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ರಾಜಕೀಯ ಪಕ್ಷಗಳು ಇದೇ 29ರಂದು ರಸ್ತೆ ಹಾಗೂ ರೈಲು ತಡೆ ನಡೆಸಲು ನಿರ್ಧರಿಸಿವೆ.

ಡಿಎಂಕೆ ಪಕ್ಷದ ಜಿಲ್ಲಾ ಘಟಕ ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದು ಇದಕ್ಕೆ ಸಿಪಿಐ, ಸಿಪಿಐ (ಎಂ), ಡಿವೈಎಫ್‌ಐ, ಐಯುಎಂಎಲ್‌, ಡಿಎಂಡಿಕೆ, ಪಿಎಂಕೆ ಮತ್ತು ದ್ರಾವಿಡ ಕಜಗಂ ಪಕ್ಷಗಳು ಬೆಂಬಲ ಸೂಚಿಸಿವೆ.

‘ಜಿಲ್ಲೆಯ ಉದ್ಯಮ ಸಂಘಟನೆಗಳು ನಮ್ಮ ಬೆಂಬಲಕ್ಕೆ ಮುಂದಾಗಿವೆ. ನ.29ರಂದು ಜಿಲ್ಲೆಯ ನೂರಕ್ಕೂ ಹೆಚ್ಚು ಕಡೆ ರಸ್ತೆ ತಡೆ ನಡೆಸುತ್ತೇವೆ. ಮಲಿಯಾದುತುರೈ, ಸರ್ಕಾಜಿ ಮತ್ತು ನಾಗಪಟ್ಟಣಂನಲ್ಲಿ ರೈಲು ತಡೆ ನಡೆಸಲಾಗುವುದು’ ಎಂದು ಮಾಜಿ ಸಂಸದ ಹಾಗೂ ಡಿಎಂಕೆ ಪಕ್ಷದ ನಾಗಪಟ್ಟಣಂ ಘಟಕದ ಕಾರ್ಯದರ್ಶಿ ಎ.ಕೆ.ಎಸ್‌.ವಿಯಜನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.