ADVERTISEMENT

‘ಪದ್ಮಾವತಿ’ ಬಿಡುಗಡೆಗೆ ಅವಕಾಶ ನೀಡುವುದಿಲ್ಲ; ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ

ಏಜೆನ್ಸೀಸ್
Published 18 ನವೆಂಬರ್ 2017, 11:46 IST
Last Updated 18 ನವೆಂಬರ್ 2017, 11:46 IST
‘ಪದ್ಮಾವತಿ’ ಬಿಡುಗಡೆಗೆ ಅವಕಾಶ ನೀಡುವುದಿಲ್ಲ; ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ
‘ಪದ್ಮಾವತಿ’ ಬಿಡುಗಡೆಗೆ ಅವಕಾಶ ನೀಡುವುದಿಲ್ಲ; ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ   

ನವದೆಹಲಿ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆ ವಿರೋಧಿಸಿ ರಜಪೂತ ಕರ್ಣಿ ಸೇನಾ ಸಂಘಟನೆ ಡಿ. 1ರಂದು ಭಾರತ ಬಂದ್‌ಗೆ ಕರೆ ನೀಡಿದೆ.

‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಬಿಡುಗಡೆ ವಿರೋಧಿಸಿ ಡಿ. 1ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಜಪೂತ ಕರ್ಣಿ ಸೇನಾ ಸಂಘಟನೆ ಅಧ್ಯಕ್ಷ ಲೋಕೇಂದ್ರ ಸಿಂಗ್‌ ಕಾಲ್ವಿ ಅವರು ಶನಿವಾರ ಹೇಳಿದ್ದಾರೆ.

ಚಿತ್ರ ವಿರೋಧಿಸಿ ಶುಕ್ರವಾರ ರಾಜಸ್ಥಾನ, ಮಧ್ಯಪ್ರದೇಶ, ವಾರಣಾಸಿ, ಬಿಹಾರ, ಛತ್ತೀಸಗಡ, ತಮಿಳುನಾಡಿನ ಕೊಯಮತ್ತೂರುಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮತ್ತೊಂದೆಡೆ ವಕೀಲರೊಬ್ಬರು, ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ADVERTISEMENT

ಬಿಹಾರದ ಪಟ್ನಾದಲ್ಲಿ ರಜಪೂತ ಮಹಿಳೆಯರು ‘ಪದ್ಮಾವತಿ’ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲೋಕೆಂದ್ರ ಸಿಂಗ್ ಕಾಲ್ವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.