ADVERTISEMENT

ಮಲ್ಯ ಉಚ್ಚಾಟನೆಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:35 IST
Last Updated 4 ಮೇ 2016, 11:35 IST
ಮಲ್ಯ ಉಚ್ಚಾಟನೆಗೆ ಶಿಫಾರಸು
ಮಲ್ಯ ಉಚ್ಚಾಟನೆಗೆ ಶಿಫಾರಸು   

ನವದೆಹಲಿ (ಪಿಟಿಐ):  ಬ್ಯಾಂಕುಗಳಿಗೆ ಸಾಲ ಬಾಕಿ ಇರಿಸಿ ವಿದೇಶಕ್ಕೆ ತೆರಳಿರುವ ಉದ್ಯಮಿ ವಿಜಯ ಮಲ್ಯ ಅವರ ವಿರುದ್ಧ ರಾಜ್ಯಸಭೆಯ ನೀತಿ ಸಮಿತಿಯು ಶಿಸ್ತುಕ್ರಮದ ಶಿಫಾರಸು ವರದಿಯನ್ನು ಬುಧವಾರ ಮಂಡಿಸಿದ್ದು ತಕ್ಷಣ ಮಲ್ಯ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸುವಂತೆ ಕೋರಿದೆ.  

ಕಾಂಗ್ರೆಸ್‌ ಸಂಸದ ಕರಣ್‌ ಸಿಂಗ್‌ ನೇತೃತ್ವದ ಸಮಿತಿಯು ವಿಷಯಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ಮಂಗಳವಾರ ಪೂರ್ಣಗೊಳಿಸಿತ್ತು.  ಮಲ್ಯ ಅವರು ಸೋಮವಾರವೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು, ಆದರೆ ಸಭಾಪತಿ ಹಮೀದ್‌ ಅನ್ಸಾರಿ ಅವರು ರಾಜೀನಾಮೆ ಪತ್ರವನ್ನು ಮಂಗಳವಾರ ತಿರಸ್ಕರಿಸಿದ್ದರು.

ಸಂಸತ್ತಿನ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವಲ್ಲಿ ಈ ಕ್ರವ ಅನಿವಾರ್ಯವಾಗಿದೆ. ಇದರಿಂದ  ಸಾರ್ವಜನಿಕರಿಗೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದು ಕರಣ್‌ ಸಿಂಗ್‌ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.