ಭೋಪಾಲ್ (ಪಿಟಿಐ): ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಬಿಜೆಪಿ ನಾಯಕ ಗುಲಾಬ್ ಸಿಂಗ್ ಕಿರರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಸಿಬಿಐ ಗುಲಾಬ್ ಸಿಂಗ್ ವಿರುದ್ಧ ನಿನ್ನೆ ಎಫ್ಐಆರ್ ದಾಖಲಿಸಿದ ಬೆನ್ನಲೇ ಮಧ್ಯಪ್ರದೇಶದ ಬಿಜೆಪಿ ಘಟಕ ಗುಲಾಬ್ ಸಿಂಗ್ ಉಚ್ಛಾಟಿಸಿದೆ.
ವ್ಯಾಪಂ ಹಗರಣದಲ್ಲಿ ಗುಲಾಬ್ ಸಿಂಗ್ ಮತ್ತವರ ಪುತ್ರ ಶಕ್ತಿ ಪ್ರಸಾದ್ ಸಿಂಗ್ ಅವರ ಹೆಸರುಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಸಿಬಿಐ ಗುಲಾಬ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ಬಿಜೆಪಿ ಮುಜುಗರ ತಪ್ಪಿಸಿಕೊಳ್ಳಲು ಗುಲಾಬ್ ಸಿಂಗ್ ಅವರನ್ನು ಉಚ್ಛಾಟಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.