ಪಟ್ನಾ (ಐಎಎನ್ಎಸ್): ‘ನಾನು ಪಿಶಾಚಿಯಾದರೆ ಮೋದಿ ಬ್ರಹ್ಮ ರಾಕ್ಷಸ’ ಎಂದು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.
ಗೋಮಾಂಸ ವಿಚಾರವಾಗಿ ಹೇಳಿಕೆ ನೀಡಿದ್ದ ಲಾಲೂ ಅವರನ್ನು ಮೋದಿ ಗುರುವಾರ ‘ಸೈತಾನ’ ಎಂದು ಟೀಕಿಸಿದ್ದರು.
ಶುಕ್ರವಾರ ಈ ಕುರಿತು ವರದಿಗಾರರಿಗೆ ಪ್ರತಿಕ್ರಿಯೆ ನೀಡಿದ ಲಾಲೂ, ಮೋದಿ ಅವರು ‘ಸೈತಾನ’ ಎಂದು ಹೇಳುವ ಮೂಲಕ ಕೆಳಜಾತಿಯಲ್ಲಿ ಹುಟ್ಟಿದ ನನ್ನನ್ನು ಮಾತ್ರವಲ್ಲ, ಇಡೀ ಯದುವಂಶಕ್ಕೇ ಅವಮಾನ ಮಾಡಿದ್ದಾರೆ. ಅವರನ್ನು ಬಿಹಾರದಿಂದ ಓಡಿಸಲು ಕೆಂಪು ಮೆಣಸಿನ ಕಾಯಿ ಹೊಗೆ ಹಾಕಬೇಕು. ನಾನು ಪಿಶಾಚಿಯಾದರೆ ಅವರು ರಾಕ್ಷಸ ಎಂದು ಹೇಳಿದರು.
ಮೋದಿ ಅವರು ಪ್ರಧಾನಿಯಾಗಲು ಯೋಗ್ಯರಲ್ಲ. ದುರದೃಷ್ಟವಶಾತ್ ಅವರು ಈ ಹುದ್ದೆಗೇರಿದ್ದಾರೆ. ಈಗ ಇಡೀ ದೇಶವೇ ಛೀ ಥೂ ಎನ್ನುತ್ತಿದೆ ಎಂದರು.
ಮೋದಿ ಹೇಳಿಕೆಯ ವಿರುದ್ಧ ಆರ್ಜೆಡಿ ಮುಖ್ಯಸ್ಥರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.