ADVERTISEMENT

ಅನುಪಮಾ ದೂರು: ಎಸ್ಪಿ ಬದಲು ಡಿವೈಎಸ್ಪಿ ಹಾಜರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬಳ್ಳಾರಿ: ಕೂಡ್ಲಿ ಗಿಯ ಮಾಜಿ ಡಿವೈ ಎಸ್ಪಿ ಅನುಪಮಾ ಶೆಣೈ ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿರುವ ದೂರಿನ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ನಡೆದ ವಿಚಾರಣೆಗೆ ಎಸ್ಪಿ ಬದಲು ನಗರ ಡಿವೈಎಸ್ಪಿ ಎಚ್‌.ಎಸ್‌.ಹೊಸಮನಿ ಹಾಜರಾಗಿದ್ದರು.

ಅನುಪಮಾ ಅವರ ಏಳು ಪುಟದ ದೂರಿಗೆ ಸಂಬಂಧಿಸಿ ವಿವರಣೆಗಳನ್ನು ನೀಡಲಾಗಿದೆ. ಕೆಲಸದ ಒತ್ತಡದ ಕಾರಣ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.