ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಬುಧವಾರ ಪೆಲಿಕನ್ ಪಕ್ಷಿಯೊಂದು ಮೃತಪಟ್ಟಿದೆ.
ಬುಧವಾರ ಬೆಳಿಗ್ಗೆ ಪೆಲಿಕನ್ ಪಕ್ಷಿಯು ಅಸ್ವಸ್ಥಗೊಂಡಿರುವುದನ್ನು ನಾಗರಿಕರು ಕಂಡಿದ್ದು, ಕೂಡಲೇ ನಗರದ ‘ಪೀಪಲ್ ಫಾರ್ ಅನಿಮಲ್’ ಸಂಸ್ಥೆಗೆ ಕರೆ ಮಾಡಿದ್ದಾರೆ.
ಸಂಸ್ಥೆಯ ಕಾರ್ಯಕರ್ತರು ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪಕ್ಷಿಯು ಮೃತಪಟ್ಟಿದೆ. ‘ನನಗೆ ಮಾಹಿತಿ ಸಿಕ್ಕಿಲ್ಲ’ ಎಂದು ವನ್ಯಜೀವಿ ವಿಭಾಗದ ಉಪಅರಣ್ಯ ಸಂಕ್ಷಣಾಧಿಕಾರಿ ಏಡುಕುಂಡಲ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.