ಭಾಲ್ಕಿ: ‘ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ನನ್ನ ವಿರುದ್ಧ ಮಾಡಿರುವ ಟೀಕೆ ಅವರ ಘನತೆಗೆ ತಕ್ಕುದ್ದಲ್ಲ’ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಟೆಂಡರ್ ಪ್ರಕ್ರಿಯೆ ಇ-ಆಡಳಿತ ಇಲಾಖೆ ನಿಯಂತ್ರಣದ ವೆಬ್ ಪೋರ್ಟಲ್ನಲ್ಲಿ ಮಾಡಲಾಗುತ್ತದೆ. ಯಾರಿಂದಲೂ ಆ ವೆಬ್ ಪೋರ್ಟಲ್ ಬ್ಲಾಕ್ ಮಾಡಲು ಆಗದು. ಆಪ್ತರ ಅರ್ಜಿಗಳನ್ನು ಮಾತ್ರ ಅಪ್ಲೋಡ್ ಆಗುವಂತೆ ಮಾಡುತ್ತಿದ್ದೇನೆ ಎನ್ನುವ ಆರೋಪದಲ್ಲಿ ಹುರುಳಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾನೂನು ಬಾಹಿರ ಕೃತ್ಯಗಳನ್ನು ಪ್ರಾರಂಭಿಸಿದವರೇ ಬಿಜೆಪಿಯವರು. ರಾಜಕೀಯ ದುರುದ್ದೇಶದಿಂದ ಹಿಂಬಾಲಕರು ನೀಡಿರುವ ತಪ್ಪು ಮಾಹಿತಿ ಅಧರಿಸಿ ಜಾವಡೇಕರ್ ಟೀಕೆ ಮಾಡಿರುವುದು ಸರಿ ಅಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಜಿಲ್ಲೆಯ ಜನರಿಗೆ ಎಲ್ಲವೂ ತಿಳಿದಿದೆ. ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.