ಬೆಂಗಳೂರು: ‘ಕೈಮಗ್ಗ ಕ್ಷೇತ್ರದಲ್ಲಿ ಯಾಂತ್ರೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹ ಕೈಬಿಡಬೇಕು’ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಮನವಿ ಮಾಡಿದ್ದಾರೆ.
‘ಕೈಮಗ್ಗದ ಕುಶಲತೆಯನ್ನೂ, ಜೊತೆಗೇ ಜೀವನೋಪಾಯವಾದ ತಂತ್ರಗಾರಿಕೆಯನ್ನೂ ನಾವು ಕಳೆದುಕೊಳ್ಳಕೂಡದು. ಈ ಬಗ್ಗೆ ನೀವು ಹೋರಾಡುತ್ತಾ ಇದ್ದೀರಿ. ಆದರೆ, ಉಪವಾಸ ಕೂರಬಾರದು. ಜನರನ್ನು ಇನ್ನೂ ಎಚ್ಚರಿಸಬೇಕಾಗಿದೆ. ಅದನ್ನು ನಾವು ನೀವು ಜತೆಗೂಡಿ ಮಾಡಬೇಕು. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ’ ಎಂದು ಪ್ರಸನ್ನ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.