ಸಂತೇಬೆನ್ನೂರು (ಚನ್ನಗಿರಿ): ಇಲ್ಲಿನ ಕೋಟೆ ರಸ್ತೆಯ ಕೃಷ್ಣ ಪಾನ್ ಬ್ರೋಕರ್ಸ್ ಅಂಗಡಿಯಲ್ಲಿ ಬಾಲಕನೊಬ್ಬ ವ್ಯಕ್ತಿಯೊಬ್ಬರ ಜೇಬಿನಿಂದ ಹಣ ಕಳವು ಮಾಡಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಬ್ಬಿಗೆರೆಯ ಶೇಖರಪ್ಪ ಹಣ ಕಳೆದುಕೊಂಡವರು. ಅವರು ಅಂಗಡಿ ಮಾಲೀಕ ಅಶೋಕ ಅವರೊಂದಿಗೆ ಮಾತನಾಡುತ್ತಿದ್ದಾಗ ಅಂಗಡಿಗೆ ಬಂದ ಬಾಲಕ ಅವರ ಜೇಬಿನಿಂದ ಹಣ ಕಳವು ಮಾಡಿದ್ದಾನೆ. ಬಾಲಕ ಪ್ಲಾಸ್ಟಿಕ್ ಕೈಚೀಲವೊಂದನ್ನು ಅಡ್ಡವಾಗಿ ಹಿಡಿದುಕೊಂಡು ಅವರ ಜೇಬಿನಿಂದ ಹಣ ಕದ್ದು ನಿಧಾನವಾಗಿ ಅಲ್ಲಿಂದ ಹೋಗಿದ್ದಾನೆ.
ಬಾಲಕನ ಸುಳಿವು ಪತ್ತೆಯಾಗಿಲ್ಲ. ಈ ಸಂಬಂಧ ದೂರು ಕೂಡಾ ದಾಖಲಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಈ ದೃಶ್ಯ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.