ADVERTISEMENT

ಉದ್ಯೋಗ ಸೃಷ್ಟಿಸಿ

ಮುತ್ತು ಎಚ್.ಗ್ವಾತಗಿ, ಕುಷ್ಟಗಿ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

‘ಇನ್ವೆಸ್ಟ್ ಕರ್ನಾಟಕ’ದ ಪ್ರಯೋಜನ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಬೇಕು. ಇದರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಕೈಗಾರಿಕೆಗಳನ್ನು ಸ್ಥಾಪಿಸುವ ನೆಪದಲ್ಲಿ ಸರ್ಕಾರ ರೈತರ ಭೂಮಿಯನ್ನು ಒತ್ತಾಯದಿಂದ ಕಿತ್ತುಕೊಳ್ಳಬಾರದು.

ಬದಲಾಗಿ ಅವರಿಗೆ ಈ ಯೋಜನೆಯ ಅಗತ್ಯ ಮತ್ತು ಅದರ ಪ್ರಯೋಜನ ಕುರಿತು ಮನವರಿಕೆ ಮಾಡಬೇಕು. ಸರಿಯಾದ ಬೆಲೆ ಕೊಟ್ಟು ಭೂಮಿಯನ್ನು ಪಡೆದುಕೊಳ್ಳಬೇಕು. ಅಗತ್ಯ ಬಿದ್ದರೆ ರೈತರಿಗೆ ಬೇರೆ ಕಡೆ ಭೂಮಿ ಕೊಡಿಸುವ ವ್ಯವಸ್ಥೆಯನ್ನು ಮಾಡಬೇಕು. ಭೂಮಿ ನೀಡಿದ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು.

ಉದ್ಯಮಗಳು ಒಂದೇ ಕಡೆ ಕೇಂದ್ರೀಕರಣ ಆಗಬಾರದು. ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಣೆಯಾಗಬೇಕು. ಇದರಿಂದ ಎಲ್ಲ ಭಾಗದ ನಿರುದ್ಯೋಗಿಗಳಿಗೂ ಅನುಕೂಲವಾಗುತ್ತದೆ. ಅಲ್ಲದೆ ಒಂದೇ ಪ್ರದೇಶದಲ್ಲಿ ಉಂಟಾಗುವಂತಹ ಜನದಟ್ಟಣೆ, ವಾಹನ ದಟ್ಟಣೆಯನ್ನು ತಪ್ಪಿಸಬಹುದು, ಹಳ್ಳಿಗರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.