ADVERTISEMENT

ಕಂಡಾ, ಬಸವಣ್ಣ!

​ಸಿ.ಪಿ.ಕೆ.ಮೈಸೂರು
Published 5 ಮೇ 2016, 19:30 IST
Last Updated 5 ಮೇ 2016, 19:30 IST

‘ಸಂಕೇತಿಗಳ ಯಾಗದಲ್ಲಿ ಮೇಕೆಗಳ ಆಹುತಿ’ (ಪ್ರ.ವಾ., ಮೇ 4).
‘ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು ಎಲೆ ಹೋತೇ, ಅಳು ಕಂಡಾ!  ವೇದವನೋದಿದವರ ಮುಂದೆ ಅಳು ಕಂಡಾ!’ ಎಂದ ನಿನ್ನ ಮಾತು ಇಂದಿಗೂ ಪ್ರಸ್ತುತವಲ್ಲವೆ? ಕಂಡಾ, ಬಸವಣ್ಣ! ಅಳಬೇಕಾದ್ದು ಹೋತವಲ್ಲ, ಮೇಕೆಯಲ್ಲ, ನೀನು ಕಂಡಾ, ಬಸವಣ್ಣ!
‘ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮದೇವ’ ಎಂದೂ ನೀನು ಎಚ್ಚರಿಸಿದೆ. ಆದರೆ, ವೇದಶಾಸ್ತ್ರ ಪಾರಂಗತರ ಮುಂದೆ, ಪಾಪ, ಅವನೂ ಅಸಹಾಯಕನಲ್ಲವೆ? (ನಿನ್ನ ಜಯಂತಿ ಬರುತ್ತದೆ, ಹೋಗುತ್ತದೆ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.