ಸಂವತ್ಸರಕ್ಕೊಮ್ಮೆ ಸಾಕೆ?
ವರುಷದ 365 ದಿವಸವೂ
ಸಮನಿಸಲಿ ‘ವೈಶಾಖ
ಶುಕ್ಲ ಪೂರ್ಣಿಮಾ’ ರಜನಿ!
ಸಿದ್ಧಾರ್ಥ ಸ್ವಾಮಿ,
ನೀನು ಒಂದು ವರ್ಗದ ಸೊತ್ತಾಗದೆ,
ಸಮಸ್ತರ ಆಸ್ತಿಯಾಗು;
‘ಏಷ್ಯದ ಬೆಳಕು’ ಮಾತ್ರವಾಗದೆ,
ಆಗು ಅಖಂಡ ವಿಶ್ವದ
ಸೂರ್ಯ ಚಂದ್ರಾತಪ!
ಭಗವಾನ್ ಬುದ್ಧ, ಜಗದಿಂದ
ನಿರಸನಗೊಳಿಸು ಯುದ್ಧ ಶಾಪ!
ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.