ಹಣ ಕೊಟ್ಟರೆ ಏನು ಬೇಕಾದರೂ ಸಂಭವಿಸಬಹುದು. ಜಿಲ್ಲಾಧಿಕಾರಿಗೂ ನಾನು ಬಿಪಿಎಲ್ ಕಾರ್ಡ್ ಕೊಡಿಸಬಲ್ಲೆ’ ಎಂದು ಶಾಸಕರೊಬ್ಬರು ಇತ್ತೀಚೆಗೆ ಹೇಳಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ತೆರೆದಿಟ್ಟ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಲ್ಯಾಣ ಕಥೆ. ಬೇರೆ ಇಲಾಖೆಗಳ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇರದು. ಬಡತನ ರೇಖೆ ಕೆಳಗೆ ಬರಬೇಕಾದರೆ ಲಂಚ ಕೊಡಬೇಕು; ಇಲ್ಲವಾದರೆ ನೀವು ಬಿಪಿಎಲ್ಗೆ ಅರ್ಹರಲ್ಲ ಎಂಬ ಸಂದೇಶವನ್ನು ಇದು ಧ್ವನಿಸುತ್ತದೆ. ಇದು ನಮ್ಮ ರಾಜ್ಯದ ಸ್ಥಿತಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.