ADVERTISEMENT

ಹೆಸರಿಗೆ ತಕರಾರೇಕೆ?

ಕೊ.ಸು.ನರಸಿಂಹ ಮೂರ್ತಿ
Published 25 ಜೂನ್ 2018, 17:29 IST
Last Updated 25 ಜೂನ್ 2018, 17:29 IST

ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ಹಜ್ಭವನಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದ್ದು ಇದಕ್ಕೆ ಕೆಲವು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿರುವುದು ವರದಿಯಾಗಿದೆ.

ಹಜ್ ಭವನವೇನೂ ಹಿಂದೂಗಳದ್ದಲ್ಲವಲ್ಲ. ಹೀಗಿರುವಾಗ ಇಂಥದ್ದೇ ಹೆಸರಿಡಿ ಎಂದು ಹೇಳಲು ನಾವ್ಯಾರು?

ತಮಗೆ ಹುಟ್ಟಿದ ಮಕ್ಕಳಿಗೆ, ತಮಗೆ ಬೇಕಾದ ಹೆಸರಿಟ್ಟುಕೊಳ್ಳಲಿ ಬಿಡಿ. ಅದನ್ನು ಬೇರೆಯವರು ಯಾಕೆ ವಿರೋಧಿಸಬೇಕು? ರಾಜಕೀಯ ಧುರೀಣರು ಅಧಿಕಾರದಲ್ಲಿದ್ದಾಗ ಒಂದು ತರಹ, ಅಧಿಕಾರ ಕಳೆದುಕೊಂಡ ನಂತರ ಇನ್ನೊಂದು ತರಹ ಆಡುವ ವಿಚಾರ ಜನರಿಗೆ ತಿಳಿಯದ ವಿಷಯವೇನಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.