ADVERTISEMENT

ಈತ ಉತ್ತರಾಖಂಡದ ‘ಬಾಹುಬಲಿ’

ವೈರಲ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಈತ ಉತ್ತರಾಖಂಡದ ‘ಬಾಹುಬಲಿ’
ಈತ ಉತ್ತರಾಖಂಡದ ‘ಬಾಹುಬಲಿ’   
ಪಂಚರಾಜ್ಯಗಳ ಚುನಾವಣೆ ಸಮಯದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರನ್ನು ‘ಬಾಹುಬಲಿ’ಯಾಗಿಸಿರುವ ವಿಡಿಯೊ ಇದೀಗ ವೈರಲ್‌ ಆಗಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೂ ಇಲ್ಲಿ ಪಾತ್ರಧಾರಿಗಳಾಗಿದ್ದಾರೆ.
 
‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್‌ ಶಿವಲಿಂಗವನ್ನು ಎತ್ತುವಂತೆ ಈ ವಿಡಿಯೊದಲ್ಲಿ ರಾವತ್‌ ಉತ್ತಾರಖಂಡ ರಾಜ್ಯವನ್ನೇ ಎತ್ತಿಕೊಂಡು ಸಾಗುತ್ತಾರೆ. ಇತರ ರಾಜಕೀಯ ಮುಖಂಡರು ಈ ದೃಶ್ಯವನ್ನು ಆಶ್ಚರ್ಯದಿಂದ ನೋಡುತ್ತಾರೆ.
 
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ   ಅಮಿತ್‌ ಶಾ ಮತ್ತು ಮೋದಿ ಬೆರಗುಗಣ್ಣಿಂದ ನೋಡುತ್ತಾರೆ.
 
ಹರೀಶ್‌ ರಾವತ್‌ ಉತ್ತರಾಖಂಡದ ರಕ್ಷಕ ಎಂಬಂತೆ ಬಿಂಬಿಸಿರುವ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಉತ್ತರಾಖಂಡ ವಿಧಾನ ಸಭೆಗೆ ಫೆ.15ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.