ADVERTISEMENT

ಟಿ.ಟಿ: ಸುಜನ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST
-ಸುಜನ್‌ ಭಾರದ್ವಾಜ್‌
-ಸುಜನ್‌ ಭಾರದ್ವಾಜ್‌   

ಬೆಂಗಳೂರು: ಎದುರಾಳಿಯ ಸವಾಲನ್ನು ಮೆಟ್ಟಿನಿಲ್ಲಲು ವಿಫಲವಾದ ಕರ್ನಾಟಕದ ಸುಜನ್‌ ಭಾರದ್ವಾಜ್‌ ಅವರು ಚಂಡಿಗಡದಲ್ಲಿ ನಡೆದ ರಾಷ್ಟ್ರೀಯ  ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ (ಉತ್ತರ ವಲಯ) ಕಂಚಿನ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಕೆಡೆಟ್‌ ಬಾಲಕರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸುಜನ್‌ 4–11, 13–11, 6–11, 15–13, 7–11ರಲ್ಲಿ ತಮಿಳುನಾಡಿನ ತರುಣ್‌ ಷಣ್ಮುಗಂ ವಿರುದ್ಧ ಸೋಲು ಕಂಡರು.

ಕ್ವಾರ್ಟರ್ ಫೈನಲ್‌ನಲ್ಲಿ 4–11, 11–7, 11–8, 11–7ರಲ್ಲಿ ಉತ್ತರ ಪ್ರದೇ ಶದ ದಿವ್ಯಾನ್ಸ್‌ ಶ್ರೀವಾಸ್ತವ ಅವರನ್ನು ಮಣಿಸಿದ್ದ ಸುಜನ್‌ ಅವರು ಸೆಮಿಫೈನಲ್‌ನಲ್ಲಿ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.