ಚೆನ್ನೈ (ಪಿಟಿಐ): ಮಾರ್ಚ್ 25ರಿಂದ ವಿಶಾಖ ಪಟ್ಟಣದಲ್ಲಿ ಆರಂಭವಾಗುವ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬುಧವಾರ ತಮಿಳುನಾಡು ತಂಡವನ್ನು ಪ್ರಕಟಿಸಲಾಗಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದ ವಿಜಯ್ ಶಂಕರ್ ಅವರನ್ನು ನಾಯಕತ್ವದಲ್ಲಿ ಮುಂದುವರಿಸಲಾಗಿದೆ.
ಬ್ಯಾಟ್ಸ್ಮನ್ ಬಾಬಾ ಅಪರಾಜಿತ್ ಮತ್ತು ವೇಗಿ ಅಶ್ವಿನ್ ಕ್ರಿಸ್ಟ್ ಅವರು ಬಾಂಗ್ಲಾದೇಶದಲ್ಲಿ ನಡೆಯುವ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಆಡಲಿದ್ದಾರೆ. ಹೀಗಾಗಿ ಇವರನ್ನು ಆಯ್ಕೆಗೆ ಪರಿಗಣಿಸಿಲ್ಲ. ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಅವರೂ ತಂಡದಲ್ಲಿದ್ದಾರೆ.
ತಂಡ ಇಂತಿದೆ: ವಿಜಯ್ ಶಂಕರ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್). ವಿ. ಗಂಗ ಶ್ರೀಧರ್ ರಾಜು, ಬಾಬಾ ಇಂದರ್ಜಿತ್, ಎಲ್. ಸೂರ್ಯಪ್ರಕಾಶ್, ಎಂ. ಕೌಶಿಕ್ ಗಾಂಧಿ, ಎನ್. ಜಗದೀಶನ್, ಜೆ. ಕೌಶಿಕ್, ಎಂ. ಮಹಮ್ಮದ್, ಡಬ್ಲ್ಯು. ಅಂಥೋಣಿ ದಾಸ್, ಆರ್. ರೋಹಿತ್, ರಾಹಿಲ್ ಷಾ, ಎಂ. ಅಶ್ವಿನ್, ಆರ್. ಸಾಯಿ ಕಿಶೋರ್ ಮತ್ತು ಎಂ.ಎಸ್. ವಾಷಿಂಗ್ಟನ್ ಸುಂದರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.