ಹೊಸನಗರ (ಶಿವಮೊಗ್ಗ ಜಿಲ್ಲೆ): ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಸೌತ್ ವೆಸ್ಟರ್ನ್ ರೈಲ್ವೆ ತಂಡ 3–2 ಸೆಟ್ಗಳಿಂದ ಎಎಸ್ಸಿ ತಂಡವನ್ನು ಸೋಲಿಸಿತು. ಕರ್ನಾಟಕ ವಾಲಿಬಾಲ್ ಲೀಗ್ ಮೂರನೇ ಹಂತದ ಟೂರ್ನಿಯಲ್ಲಿ ಇದು ರೈಲ್ವೆ ತಂಡಕ್ಕೆ ಮೊದಲ ಗೆಲುವು.
ಪಟ್ಟಣದ ನೆಹರೂ ಕ್ರೀಡಾಂ ಗಣದಲ್ಲಿ ಟೂರ್ನಿಯ ಎರಡನೇ ದಿನ ವಾದ ಗುರುವಾರ ಹುಬ್ಬಳ್ಳಿಯ ರೈಲ್ವೆ ತಂಡ 21–25, 18–25, 25–-23, 28–-26, 15–-6 ರಲ್ಲಿ ರೋಚಕ ಜಯ ಪಡೆಯಿತು.
ಮೊದಲ ಎರಡು ಸೆಟ್ ಗೆದ್ದ ಎಎಸ್ಸಿ ಮೂರನೇ ಸೆಟ್ನಲ್ಲಿ 19–19ರಲ್ಲಿ ಸಮ ಮಾಡಿಕೊಂಡಿದ್ದು ಗೆಲುವಿನತ್ತ ಹೆಜ್ಜೆಯಿಡುವಂತೆ ಕಂಡಿತ್ತು. ಆದರೆ ಈ ಹಂತದಲ್ಲಿ ಸೇನಾ ತಂಡದ ಆಟಗಾರರ ಹಿಡಿತ ಸಡಿಲಗೊಂಡಿತು. ರೈಲ್ವೆ ತಂಡ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು.
ಬೆಂಗಳೂರಿನ ಹೊಯ್ಸಳ ತಂಡ ತಾಂತ್ರಿಕ ಸಮಸ್ಯೆಯಿಂದಾಗಿ ಎದುರಾಳಿ ಬೆಂಗಳೂರಿನ ಸಿಐಕ್ಯುಎಎಲ್ ತಂಡಕ್ಕೆ ವಾಕ್ ಓವರ್ ನೀಡಬೇಕಾಯಿತು. ಬಳ್ಳಾರಿಯ ಜಿಂದಾಲ್ ಸೌತ್ ವೆಸ್ಟ್ ತಂಡ 22-–25, 38–-36, 25–-25, 25–-22ರಲ್ಲಿ 3–-1 ಸೆಟ್ಗಳಿಂದ ಎಎಸ್ಸಿ ತಂಡವನ್ನು ಸೋಲಿಸಿತ್ತು.
ಇತರ ಪಂದ್ಯಗಳಲ್ಲಿ ಸಿಕ್ಯುಎಎಲ್ ತಂಡ 25–-23, 25–-21, 25–-22, 25–-14 ರಲ್ಲಿ ಬಿಎಸ್ಎನ್ಎಲ್ ತಂಡದ ವಿರುದ್ಧ 3–-1 ಅಂತರದಲ್ಲಿ, ಪೋಸ್ಟಲ್ ತಂಡ 26-–28, 25-–20, 25–-21, 25–-18 ಪಾಯಿಂಟ್ಗಳಿಂದ ಸೌತ್ ವೆಸ್ಟರ್ನ್ ರೈಲ್ವೆ ತಂಡವನ್ನು ಸೋಲಿಸಿತು.
ಹೊಯ್ಸಳ ತಂಡ 26–-24, 20-–25, 25–-23, 19-–25, 15–-12 ರಲ್ಲಿ ಕರ್ನಾಟಕ ಪೊಲೀಸ್ ತಂಡದ ವಿರುದ್ಧ ಗೆಲುವು ಸಾಧಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.