ಜಕಾರ್ತ: ಶೂಟಿಂಗ್ನಲ್ಲಿ ಚಿನ್ನದ ಸಾಧನೆ ಮಾಡಿದ ರಾಹಿ ಸರ್ನೋಬತ್ ಅವರು ಜಕಾರ್ತದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಓದುತ್ತಿರುವ ಕೃತಿಯ ಲೇಖಕ ಯಾರು ಗೊತ್ತೇ?
ಕನ್ನಡದ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಕೃತಿಯನ್ನು ಅವರು ಈಗ ಓದುತ್ತಿದ್ದಾರಂತೆ.
‘ಇಲ್ಲಿಗೆ ಬರುವಾಗ ನನ್ನೊಂದಿಗೆ ನಾಲ್ಕು ಕಾದಂಬರಿಗಳನ್ನು ತಂದಿದ್ದೆ. ಸದ್ಯ ಎಸ್.ಎಲ್. ಭೈರಪ್ಪ ಅವರ ಕೃತಿಯನ್ನು ಓದುತ್ತಿದ್ದೇನೆ. ಮಾನವೀಯ ಸಂಬಂಧಗಳು ಮತ್ತು ತತ್ವಶಾಸ್ತ್ರ ಆಧಾರಿತ ಅವರ ಕನ್ನಡದ ಕಾದಂಬರಿಯನ್ನು ಮರಾಠಿಯಲ್ಲಿ ಅನುವಾದಿಸಲಾಗಿದೆ. ಅದನ್ನು ಓದುತ್ತಿದ್ದೇನೆ’ ಎಂದು ರಾಹಿ ಹೇಳಿದರು.
‘ಈಗ ಮೂರು ದಿನಗಳ ಬಿಡುವು ಇದೆ. ನನ್ನ ಕೋಣೆಯಲ್ಲಿ ಕುಳಿತು ಓದು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.