ADVERTISEMENT

ಕವಿತೆ: ಹೇಗೆ ಕರೆತರಲಿ...

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 19:30 IST
Last Updated 3 ಅಕ್ಟೋಬರ್ 2020, 19:30 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ಮತ್ತೆ ಹೇಗೆ ನಾ
ನಿಮ್ಮನ್ನು ಹುಡುಕಲಿ
ಹೇಗೆ ಕರೆತರಲಿ
ಗಾಡಂಧಕಾರವೇ....
ಲೋಕ ವ್ಯಾಪಿಸಿ
ಮೌಲ್ಯಗಳು ಕಾಣದಂತೆ;

ವ್ಯೂಹಗಳ ಜಾಲ
ಸತ್ಯ ನಿಷ್ಠೆಯ
ತಕ್ಕಡಿ
ಮೇಲೆಕೆಳಗೆ ತಿರುಗಿಸುವ

ಮೂಢರ ಕೈಚಳಕವೇ
ಮುಖ್ಯವಾಗಿ ನಿಮ್ಮ
‘ಚರಕದ ತಿರುಗು ಗಾಣದೆ’
ಆ ಸಿದ್ಧಾಂತ ತತ್ವಗಳು
ತೂರಿ ಹಾರಿಸಿ
ಅಟ್ಟಹಾಸಗೈಯುವ
ಅರಾಜಕತೆಯ ತಾಂಡವ
ವಿಜೃಂಭಿಸುವಾಗ

ADVERTISEMENT

ಅಭಯದ ನೆರಳಿಂದ ನಿಮ್ಮ
ಎಲ್ಲಿ ಹುಡುಕಲಿ ಹೇಗೆ ಕರೆತರಲಿ
ಕರಕಾಗುವ ಅಹಿಂಸೆ
ನಾನಾ ರೂಪಗಳ ಕೂಪವಾಗಿ
ಹೆಣ್ತನವ ಕುಕ್ಕಿಕುಕ್ಕಿ ಕೊಲ್ಲುವ ಕಮಟು

ಧಗೆಯ ದಟ್ಟವಾಗಿ
ಶಾಂತಿಯ ಸಮನ್ವಯದ
ಸಹಬಾಳ್ವೆಗೆ
‘ಅಭಯವೆ’
ಎಲ್ಲಿ ಹುಡುಕಲಿ
ಹೇಗೆ ಕರೆತರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.