ಸುಂಟಿಕೊಪ್ಪ: ಇಲ್ಲಿನ ನಾರ್ಗಾಣೆ ಗ್ರಾಮದ ಯಂಕನ ಶ್ರೀರಾಮ್ ಎಂಬುವ ವರಿಗೆ ಸೇರಿದ ತೋಟದಲ್ಲಿ ಎಂಟು ಕಾಡುಕೋಣಗಳು ಕಾಣಿಸಿಕೊಂಡು ಆತಂಕ ಮೂಡಿಸಿವೆ.
10 ದಿನಗಳಿಂದ ಬೀಡು ಬಿಟ್ಟಿರುವ ಕಾಡುಕೋಣಗಳ ಹಿಂಡಿನಿಂದಾಗಿ ತೋಟದಲ್ಲಿ ಓಡಾಡುವುದಕ್ಕೂ ಭಯ ವಾಗಿದೆ. ಅಲ್ಲದೇ ತೋಟದ ಕೆಲಸಗಳಿಗೆ ಕೂಡ ಅಡ್ಡಿ ಉಂಟಾಗಿದೆ ಎಂದು ಯಂಕನ ಕುಟುಂಬಸ್ಥರು ತಿಳಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.