ADVERTISEMENT

ಕೊಡಗು: ಕುಶಾಲನಗರಕ್ಕೆ ಜಲಾವೃತದ ಭೀತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 11:58 IST
Last Updated 24 ಜುಲೈ 2021, 11:58 IST
ಕುಶಾಲನಗರದ ಸಮೀಪ ಜಲಾವೃತವಾಗಿರುವ ಪ್ರದೇಶ
ಕುಶಾಲನಗರದ ಸಮೀಪ ಜಲಾವೃತವಾಗಿರುವ ಪ್ರದೇಶ   

ಮಡಿಕೇರಿ: ಕುಶಾಲನಗರ ಭಾಗದಲ್ಲಿ ಕಾವೇರಿ ನದಿಯು ತುಂಬಿ ಹರಿಯುತ್ತಿದೆ. ಅತ್ತ ಹಾರಂಗಿ ಜಲಾಶಯದಿಂದಲೂ ಅಪಾರ ಪ್ರಮಾಣ ನೀರನ್ನು‌ ನದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಇದರಿಂದ, ಕುಶಾಲನಗರದ ಸಾಯಿ, ಕುವೆಂಪು ಬಡಾವಣೆ,ಎಪಿಎಂಸಿ ಸೇರಿ ಹಲವು ಬಡಾವಣೆಗಳಿಗೆ ಜಲಾವೃತದ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಮಳೆ ಅಬ್ಬರ ಸ್ವಲ್ಪ ತಗ್ಗಿದ್ದರೂ ಪ್ರವಾಹ ಇಳಿದಿಲ್ಲ. ಕಾನೂರು, ಶ್ರೀಮಂಗಲ ಭಾಗದ ಗದ್ದೆಗಳಿಗೆ ಲಕ್ಷ್ಮಣ ತೀರ್ಥ ನದಿಯ ನೀರು‌‌‌ ನುಗ್ಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.