ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ 8ರಂದು ಚೆನ್ನೈನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ವಿಡಿಯೊ ವೈರಲ್ ಆಗಿತ್ತು. ಮಹಾರಾಷ್ಟ್ರದ ಕಾಂಗ್ರೆಸ್ ಸೇವಾದಳ ಘಟಕ ಮಾಡಿರುವ ಟ್ವೀಟ್ನಲ್ಲಿ ನಿರ್ಮಲಾ ಅವರು ಈರುಳ್ಳಿ ಖರೀದಿಸುತ್ತಿರುವ ಚಿತ್ರವಿದೆ. ‘ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವಾಗ ಈರುಳ್ಳಿ ಸೇವಿಸುವುದಿಲ್ಲ ಎಂದು ಹೇಳಿದ್ದ ನಿರ್ಮಲಾ ಅವರು ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸಿದ್ದಾರೆ’ ಎಂದು ಹೇಳಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರೂ ಇದೇ ವಾದ ಮಂಡಿಸಿದ್ದಾರೆ.
ವೈರಲ್ ಆಗಿರುವ ಚಿತ್ರವನ್ನು ತಿರುಚಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಜಾಲತಾಣವು ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಸಚಿವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಲಾಗಿರುವ ಮೂಲ ವಿಡಿಯೊ ಪರಿಶೀಲಿಸಲಾಗಿದೆ. ನಿರ್ಮಲಾ ಅವರು ಕೆಸುವಿನ ಗೆಡ್ಡೆಯನ್ನು ಬುಟ್ಟಿಗೆ ಹಾಕುತ್ತಿರುವ ದೃಶ್ಯವನ್ನು ತಿರುಚಿ, ಅವರು ಈರುಳ್ಳಿ ಖರೀದಿಸಿದಂತೆ ತೋರುವ ಹಾಗೆ ಮಾರ್ಪಡಿಸಲಾಗಿದೆ ಎಂದು ವೆಬ್ಸೈಟ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.