ADVERTISEMENT

ಲಂಚ ಕೇಳಿದ ಆರೋಪ: ಜಿಎಸ್‌ಟಿ ಆಯುಕ್ತ, ಇತರ ಎಂಟು ಜನರನ್ನು ಬಂಧಿಸಿದ ಸಿಬಿಐ

ಏಜೆನ್ಸೀಸ್
Published 3 ಫೆಬ್ರುವರಿ 2018, 6:12 IST
Last Updated 3 ಫೆಬ್ರುವರಿ 2018, 6:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾನ್ಪುರ: ಲಂಚ ಕೇಳಿದ ಆರೋಪದಲ್ಲಿ, ಕಾನ್ಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸರಕು ಮತ್ತು ಸೇವಾ ತೆರಿಗೆ ಆಯುಕ್ತ (ಜಿಎಸ್‌ಟಿ) ಸನ್ಸಾರ್ ಚಾಂದ್ ಮತ್ತು ಎಂಟು ಜನರನ್ನು ಸಿಬಿಐ ಬಂಧಿಸಿದೆ.

ಚಾಂದ್ ಮತ್ತು ಅವರ ಜತೆ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ ಮತ್ತು ಇತರ ಐವರನ್ನು ಸಿಬಿಐ ಬಂಧಿಸಿದೆ ಎಂದು ಆಲ್‌ ಇಂಡಿಯಾ ರೇಡಿಯೋ ನ್ಯೂಸ್ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT