ADVERTISEMENT

ಟೆನಿಸ್ ಟೂರ್ನಿ: ವರುಣ್ಯಾ, ಸಂಚಿತ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 21:35 IST
Last Updated 2 ಸೆಪ್ಟೆಂಬರ್ 2021, 21:35 IST
ಪ್ರಶಸ್ತಿಯೊಂದಿಗೆ ವರುಣ್ಯಾ ಸಿ.ಎನ್‌. (ಎಡ) ಮತ್ತು ಸಂಚಿತ್ ಸುಧೀರ್ ರಾವ್‌
ಪ್ರಶಸ್ತಿಯೊಂದಿಗೆ ವರುಣ್ಯಾ ಸಿ.ಎನ್‌. (ಎಡ) ಮತ್ತು ಸಂಚಿತ್ ಸುಧೀರ್ ರಾವ್‌   

ಬೆಂಗಳೂರು: ಸಂಚಿತ್ ಸುಧೀರ್ ರಾವ್ ಮತ್ತು ವರುಣ್ಯಾ ಸಿ.ಎನ್. ಅವರು ಇಲ್ಲಿ ನಡೆದ ಎಐಟಿಎ ಟಿಎಸ್–3 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಸಹಯೋಗದೊಂದಿಗೆ ಫಾರ್ಚುನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಸಂಚಿತ್ 6-3, 6-7 (3), 7-5ರಿಂದ ಶ್ರೀಕರ್ ಡೋಣಿ ಅವರನ್ನು ಸೋಲಿಸಿದರು. ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಮೈಸೂರಿನ ವರುಣ್ಯಾ 6-2, 6-2ರಿಂದ ಅಗ್ರಶ್ರೇಯಾಂಕದ ಮಹಿಕಾ ರೆಡ್ಡಿ ಅವರಿಗೆ ಸೋಲುಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT