ADVERTISEMENT

ಪಾಲ್ಗರ್ ಪ್ರಕರಣ | ಸಾಧುಗಳೊಂದಿಗೆ ಮೃತಪಟ್ಟ ಚಾಲಕನ ಕುಟುಂಬದ ನೆರವಿಗೆ ನಿಂತ ರವೀನಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 2:58 IST
Last Updated 29 ಏಪ್ರಿಲ್ 2020, 2:58 IST
   

ಮುಂಬೈ: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಮೃತಪಟ್ಟ ಕಾರು ಚಾಲಕನ ಕುಟುಂಬಕ್ಕೆ ನೆರವು ನೀಡಲು ಬಾಲಿವುಡ್‌ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರವೀನಾ ಟಂಡನ್‌ ಮುಂದಾಗಿದ್ದಾರೆ.

ಇತ್ತೀಚೆಗೆಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳು ಹಾಗೂ ಅವರನ್ನು ಕರೆ ತಂದಿದ್ದ ಕಾರು ಚಾಲಕನನ್ನು ಪಾಲ್ಗರ್‌ ಜಿಲ್ಲೆಯ ಗ್ರಾಮವೊಂದರ ಜನರು ಪೊಲೀಸರ ಎದುರೇ ದೊಣ್ಣೆಗಳಿಂದ ಹೊಡೆದು ಕೊಂದಿದ್ದರು. ಚಾಲಕನನ್ನು ಮುಂಬೈ ಮೂಲದ ನಿಲೇಶ್ ತೆಲ್ಗಡೆ (30) ಎಂದು ಗುರುತಿಸಲಾಗಿತ್ತು.

ಇದೀಗ ಚಾಲಕನ ಕಟುಂಬಕ್ಕೆ ರವೀನಾ ನೆರವಾಗಲು ಮುಂದಾಗಿರುವ ವಿಚಾರವನ್ನು ಬಿಜೆಪಿಯ ಮಾಜಿ ಶಾಸಕ ಮತ್ತು ಹಿರಿಯ ಮುಖಂಡ ಕೃಷ್ಣ ಹೆಗ್ಡೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ನನ್ನ ಸ್ನೇಹಿತೆ ಹಾಗೂ ನಟಿ, ಹೋರಾಟಗಾರ್ತಿ ರವೀನಾ ಟಂಟನ್‌ ಪಾಲ್ಗರ್‌ನಲ್ಲಿ ಮೃತಪಟ್ಟ ನಿಲೇಶ್‌ ತೆಲ್ಗಡೆ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಜೊತೆಗೆ ತಮ್ಮರುದ್ರಾ ಫೌಂಡೇಷನ್‌ ಮೂಲಕ ಆರ್ಥಿಕ ನೆರವನ್ನೂ ನೀಡಲಿದ್ದಾರೆ.ನಿಲೇಶ್‌ ಕುಟುಂಬಕ್ಕೆ ನೆರವಾಗುವಂತೆ ಅನೇಕ ಸ್ನೇಹಿತರೊಂದಿಗೂ ರವೀನಾ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.