ADVERTISEMENT

ರಾಯಚೂರಿನಲ್ಲಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 7:19 IST
Last Updated 7 ಏಪ್ರಿಲ್ 2020, 7:19 IST
   

ರಾಯಚೂರು:ಜಿಲ್ಲೆಯಾದ್ಯಂತ ವಿವಿಧ ಬ್ಯಾಂಕ್ ಶಾಖೆಗಳ ಎದುರು ಖಾತೆದಾರರು ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು, ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬಹುತೇಕರು ಜನಧನ್ ಖಾತೆಗೆ ಜಮಾ ಮಾಡಿರುವ ₹500 ಹಣ ಪಡೆದುಕೊಳ್ಳಲು ಬಂದಿದ್ದಾರೆ. ವೃದ್ಧರು, ಅಂಗವಿಕಲರು ಸೇರಿದಂತೆ ಮಾಸಾಶನ ಪಡೆಯುವವರು ಸಹ ಬ್ಯಾಂಕ್ ಗಳತ್ತ ಧಾವಿಸುತ್ತಿದ್ದಾರೆ.

ಪಡಿತರ ಅಂಗಡಿಯಲ್ಲೂ ದಟ್ಟಣೆ: ಜಿಲ್ಲೆಯಲ್ಲಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳ‌ ಎದುರು ಕೂಡಾ ಕಡುಬಡವರು ನೆರೆದಿದ್ದಾರೆ.
ಕೆಲವು ಕಡೆಗಳಲ್ಲಿ ಮಾತ್ರ ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಲಾಗಿದೆ. ಅದರಾಚೆ ನಿಂತಿರುವವರಲ್ಲಿ ಯಾವುದೇ ಅಂತರವಿಲ್ಲ. 'ಗುರುತು ಹಾಕಲು ರಂಗೋಲಿ ಸಿಗುತ್ತಿಲ್ಲ. ಬಣ್ಣದ ಪೌಡರ್ ಕೂಡಾ ಇಲ್ಲ' ನ್ಯಾಯಬೆಲೆ ಅಂಗಡಿ ನಡೆಸುವವರು ಹೇಳುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.