ADVERTISEMENT

'ಪೊಲೀಸರಿಂದ ನಾಟಕ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:45 IST
Last Updated 16 ಡಿಸೆಂಬರ್ 2019, 19:45 IST
ಪರಿವರ್ತನೆ ನಿಮ್ಮಿಂದಲೆ ನಾಟಕದ ದೃಶ್ಯ
ಪರಿವರ್ತನೆ ನಿಮ್ಮಿಂದಲೆ ನಾಟಕದ ದೃಶ್ಯ   

ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿ, ಅಪರಾಧ ತಡೆ ಮಾಸಾಚರಣೆಯಂಗವಾಗಿ ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ‘ಪರಿವರ್ತನೆ ನಿಮ್ಮಿಂದಲೆ’ ಎಂಬ ನಾಟಕ ಪ್ರದರ್ಶಿಸಿದರು.

ಈ ಮೂಲಕ ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯಕ್ರಮಕ್ಕೆ ಪುನಶ್ಚೇತನ ಎಂಬ ಸರ್ಕಾರೇತರ ಸಾಮಾಜಿಕ ಸಂಸ್ಥೆಯ ಸಹಕಾರ ನೀಡಿತ್ತು.

ನಾಟಕದಲ್ಲಿ ಮಕ್ಕಳ ಮೇಲಿನ ಅತಿಯಾದ ವ್ಯಾಮೋಹದಿಂದ ಆಗುವ ಪರಿಣಾಮ, ಗಂಡನ ಕುಡಿತದ ಚಟದಿಂದ ಆಗುವ ದುಷ್ಪರಿಣಾಮ, ಮನೆ ಕಳ್ಳತನ ಮತ್ತು ಅದನ್ನು ತಡೆಗಟ್ಟುವ ವಿಧಾನ, ಟ್ರಾಫಿಕ್ ಸಮಸ್ಯೆ, ಡ್ರಿಂಕ್ ಆ್ಯಂಡ್ ಡ್ರೈವ್, ಮಾದಕ ವಸ್ತುಗಳ ತಡೆಗಟ್ಟುವಿಕೆ, ಸಾಮಾಜಿಕ ಭದ್ರತೆ ಹೀಗೆ ಅನೇಕ ವಿಷಯಗಳ ಮೇಲೆ ಗಮನ ಹರಿಸಲಾಗಿತ್ತು. ಈ ನಾಟಕವನ್ನು ಆರ್ಯ ನಿರ್ದೇಶನ ಮಾಡಿದ್ದರು.

ADVERTISEMENT

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಿ, ರಾ.ರಾ. ನಗರದ ಇನ್‌ಸ್ಪೆಕ್ಟರ್‌ ನವೀನ್ ಸುಪೇಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.