ADVERTISEMENT

ಹುಬ್ಬಳ್ಳಿ ಸಿದ್ಧಾರೂಢ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 19:30 IST
Last Updated 1 ಮಾರ್ಚ್ 2019, 19:30 IST
ಸಿದ್ಧಾರೂಢ ಜಾತ್ರೆ
ಸಿದ್ಧಾರೂಢ ಜಾತ್ರೆ   

ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಎಂಬ ಭಕ್ತರ ಜಯಘೋಷಗಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಹತ್ವವನ್ನು ಸಾರುತ್ತವೆ. ಶಿವರಾತ್ರಿ ಮರು ದಿನ, ಮಾರ್ಚ್‌ ಐದರಂದು ನಡೆಯುವ ಜಾತ್ರೆಯಲ್ಲಿ ಈ ಜಯಘೋಷಗಳು ಮತ್ತೆ ಅನುರಣಿಸಲಿವೆ.

ಸಿದ್ಧಾರೂಢ ಸ್ವಾಮೀಜಿ ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1836ರ ಮಾರ್ಚ್ 26ರಂದು ಜನಿಸಿದರು. ಚಿಕ್ಕಂದಿನಲ್ಲಿ ಸಿದ್ಧ ಎಂದು ಅವರನ್ನು ಕರೆಯಲಾಗುತ್ತಿತ್ತು. ಮನೆ ಬಿಟ್ಟು ಲೋಕಸಂಚಾರ ಆರಂಭಿಸಿದ ಅವರು, ಎಷ್ಟೋ ಜನರ ಸಂಕಷ್ಟಗಳನ್ನು ಪವಾಡಗಳ ಮೂಲಕ ಪರಿಹರಿಸಿದರು.

41ನೇ ವಯಸ್ಸಿನಲ್ಲಿ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತರು. ಅನೇಕ ಪವಾಡಗಳನ್ನು ಮಾಡಿದ ಅವರು, 1929ರ ಆಗಸ್ಟ್‌ 21ರಂದು ಲಿಂಗೈಕ್ಯರಾದರು.

ADVERTISEMENT

ಗಾಂಧೀಜಿ, ತಿಲಕರ ಭೇಟಿ: 1918 ಬಾಲಗಂಗಾಧರ ತಿಳಕ, 1924ರಲ್ಲಿ ಮಹಾತ್ಮ ಗಾಂಧಿ ಅವರು ಹುಬ್ಬಳ್ಳಿಗೆ ಬಂದಾಗ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ಧಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.