ADVERTISEMENT

ಅಂಗೈಲಿ ಆರೋಗ್ಯ

ಹೊ.ರಾ.ಪರಮೇಶ್ ಹೊಡೇನೂರು
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ಬಿಳುಪು ಬಣ್ಣದ ಮೂಲಂಗಿಯ
ತಿನ್ನಲು ತಡೆವುದು ಮೂಲವ್ಯಾಧಿಯ
ಕೇಸರಿ ಬಣ್ಣದ ಕಿತ್ತಳೆ ಹಣ್ಣು
ತಿಂದರೆ ಕಳೆವುದು ಬಾಯಿ ಹುಣ್ಣು

ಕೆಂಪನೆ ಮಿನುಗುವ ಕಲ್ಲಂಗಡಿಯ
ತಿನ್ನಲು ತಡೆವುದು ಬಾಯಾರಿಕೆಯ
ತಿಳಿ ಹಸಿರಿನ ಹಸಿಯಾದ ಸೌತೆ
ಪಚನಕ್ರಿಯೆಗೆ ಸಹಕಾರಿಯಂತೆ

ಕೆಂಬಣ್ಣದ ಸಿಹಿ ಕಾಶ್ಮೀರ ಸೇಬು
ತಿನ್ನಲು ತುಂಬದು ವೈದ್ಯರ ಜೇಬು
ಹಲವು ವರ್ಣಗಳ ತರಕಾರಿಗಳ
ದಿನವೂ ತಿನ್ನಲು ಶಕ್ತಿಯು ಬಹಳ
ಬಗೆ ಬಗೆ ಬಣ್ಣದ ಧಾನ್ಯಗಳ
ಪ್ರತಿ ದಿನ ಸೇವಿಸೆ ಕಾಯಿಲೆ ವಿರಳ

ADVERTISEMENT

ನಮ್ಮ ನಡುವಿನ ಸಸ್ಯೋತ್ಪನ್ನಗಳು
ಪೋಷಕಾಂಶಗಳ ಭಂಡಾರಗಳು
ಕರಿದು ಬೇಯಿಸುವ ಕುರುಕಲು ತಿಂಡಿ
ತಿಂದರೆ ಹತ್ತಬೇಕು ರೋಗಗಳ ಬಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.