ADVERTISEMENT

ಕನ್ನಡ ಕಲಿಕೆ

ಹೊರೆಯಾಲ ದೊರೆಸ್ವಾಮಿಮೈಸೂರು
Published 24 ಆಗಸ್ಟ್ 2019, 19:30 IST
Last Updated 24 ಆಗಸ್ಟ್ 2019, 19:30 IST
ಕಲೆ: ಶ್ರೀಕಂಠಮೂರ್ತಿ ಎಂ.ಎಸ್.
ಕಲೆ: ಶ್ರೀಕಂಠಮೂರ್ತಿ ಎಂ.ಎಸ್.   

ಅ ಆ ಇ ಈ ಬರೆಯೋಣ
ಅಮ್ಮನ ನುಡಿಯನು ಕಲಿಯೋಣ

ಉ ಊ ಋ ಬರೆಯೋಣ
ಊರಿನ ನುಡಿಯನು ಕಲಿಯೋಣ

ಎ ಏ ಐ ಬರೆಯೋಣ
ಎಲ್ಲರ ಜೊತೆಯಲಿ ಕಲಿಯೋಣ

ADVERTISEMENT

ಒ ಓ ಔ ಬರೆಯೋಣ
ಓಡಾಡುತ ನಾವು ಕಲಿಯೋಣ

ಅಂ ಅಃ ಬರೆಯೋಣ
ಅಂದದ ಅಕ್ಷರ ಕಲಿಯೋಣ

ಮುಂದಿನ ಅಕ್ಷರ ಚಂದದಿ ಕಲಿಯುತ
ಮುಂದಕೆ ನಾವು ಸಾಗೋಣ

ಕನ್ನಡ ನಾಡಲಿ ಕನ್ನಡ ಬಳಸುತ
ನಮ್ಮಯ ನಾಡನು ಕಟ್ಟೋಣ
ನಾವೆಲ್ಲರು ಒಟ್ಟಿಗೆ ಬಾಳೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.