ಅಶೋಕ ಹೊಸಮನಿ ಅವರ ಕವನ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ
ಹಣ್ಣಿನ ಗಾಯಗಳು
ಮುಕ್ಕಳಿಸತೊಡಗಿದವು
ನದಿಗಳು
ಹೃದಯವನ್ನೆ ಗುರಿಯಾಗಿಸಿಕೊಂಡ
ಕದನಗಳು
ಕದನ ವಿರಾಮಗಳು
ಛಿದ್ರ ಛಿದ್ರ ಹೂವುಗಳು
ಪಾದಗಳ ಕವುಚಿ
ರಕ್ತ ಸಿಕ್ತ ಬೆಳದಿಂಗಳ
ಹೆಗಲಿಗೇರಿಸಿ
ಮತ್ತದೇ ಬಾಂಬು ಬಂದೂಕು
ಬೊಬ್ಬಿಡುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ
ಇನ್ನೇನು ಧ್ಯಾನಿಸಲಿ
ನೆತ್ತರ ಕಡಲಲಿ
ಈಜಿ
ಹೊತ್ತು ಕಳೆದೀತು ಹೇಗೆ?
ಕನಸಿದ ಕನಸ ಮುರುಟಿ
ನಿರಿಗೆಗಳು ಚೂರು ಚೂರಾಗುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.