ADVERTISEMENT

ಶುಭ ಸಮಾರಂಭಗಳಲ್ಲಿ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಿ

ಎಲ್.ವಿವೇಕಾನಂದ ಆಚಾರ್ಯ
Published 7 ಡಿಸೆಂಬರ್ 2025, 1:13 IST
Last Updated 7 ಡಿಸೆಂಬರ್ 2025, 1:13 IST
<div class="paragraphs"><p>ಚಿತ್ರ: ಗೆಟ್ಟಿ&nbsp;</p></div>
   

ಚಿತ್ರ: ಗೆಟ್ಟಿ 

ಶುಭ ಸಮಾರಂಭಗಳಿಗೆ ಹೋಗುವಾಗ ಉಡುಗೊರೆಗಳನ್ನು ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಮದುವೆ, ಉಪನಯನ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಹೀಗೆ ಇತ್ಯಾದಿಗಳಾಗಿರಬಹುದು. ಉಡುಗೊರೆ ಕೊಡುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಜ್ಯೋತಿಷ ಹೇಳುತ್ತದೆ.

  • ಗಣೇಶನನ್ನು ವಿಘ್ನ ನಿವಾರಕ ಎಂದು ಹೇಳಲಾಗುತ್ತದೆ. ಹಾಗಾಗಿ ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರ, ಪ್ಲಾಸ್ಟಿಕ್ ಅಥವಾ ಪಿಂಗಾಣಿಯ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು.

    ADVERTISEMENT
  • ಗೋಮುತಿ ಚಕ್ರ ಲಕ್ಷ್ಮೀಯ ಸಂಕೇತವೆಂದು ಹೇಳಲಾಗುತ್ತದೆ. ಇದನ್ನು ಉಡುಗೊರೆಯಾಗಿ ನೀಡುವುದು ಶುಭಕರ.

  • ಆಮೆಯ ವಿಗ್ರಹ ಸಹ ಉಡುಗೊರೆಯಾಗಿ ನೀಡಬಹುದು. ಇದನ್ನು ವಿಷ್ಣುವಿನ ಸ್ವರೂಪ ಎಂದು ಹೇಳಲಾಗುತ್ತದೆ. 

  • ಆನೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಆದರೆ ಮರ ಅಥವಾ ಶ್ರೀಗಂಧದಿಂದ ಮಾಡಿದ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಎಂದು ಹೇಳಲಾಗುತ್ತದೆ.

  • ವಾಸ್ತುಶಿಲ್ಪದ ಪ್ರಕಾರ ನೀರಿನ ಕಾರಂಜಿಯನ್ನು ಉಡುಗೊರೆಯಾಗಿ ಕೊಡಬಹುದು. ಇದರಿಂದ ವರುಣನ ಕೃಪೆ ಪ್ರಾಪ್ತವಾಗುತ್ತದೆ.

  • ಹೂವಿನ ಗಿಡಗಳನ್ನು ಉಡುಗೊರೆಯಾಗಿ ಕೊಡುವುದು ಉತ್ತಮ ಎಂದು ಹೇಳಲಾಗುತ್ತದೆ.

 ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು:

  • ಲಕ್ಷ್ಮೀ ದೇವರ ವಿಗ್ರಹ, ಕಾಮಾಕ್ಷಿ ದೀಪ ಅಥವಾ ಈಗಾಗಲೇ ನೀವು ಬಳಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ಕೊಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.