
ಪ್ರಜಾವಾಣಿ ವಾರ್ತೆವಿಶ್ವಸಂಸ್ಥೆ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಜನರಲ್ಲಿ ಸೃಷ್ಟಿಯಾಗಿರುವ ಹತಾಶೆಗೆ ಮುಂಬರುವ `ಜಿ-20~ ಶೃಂಗಸಭೆಯಲ್ಲಿ ಪರಿಹಾರ ಕಂಡುಹಿಡಿಯಬೇಕು ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಆಗ್ರಹಿಸಿದ್ದಾರೆ.
ಕೇವಲ ದೇಶೀಯ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸಲು ಮಾತ್ರ `ಜಿ-20~ ವೇದಿಕೆ ಆಗಬಾರದು. ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತ ಜನರ ಹತಾಶೆ ವ್ಯಕ್ತವಾಗುತ್ತಿದೆ.
`ವಾಲ್ಸ್ಟ್ರೀಟ್ ಮುತ್ತಿಗೆ~ ಆಂದೋಲನದ ಮೂಲಕ ಜನರು ತಾವು ಏನನ್ನು ಬಯಸುತ್ತೇವೆ ಎನ್ನುವುದನ್ನು ಇಡೀ ಪ್ರಪಂಚಕ್ಕೆ ಸ್ಪಷ್ಟ ಮತ್ತು ಸಂದೇಹಕ್ಕೆ ಎಡೆಯಿಲ್ಲದ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ `ಜಿ-20~ ನಾಯಕರು ಜಾಗತಿಕ ಆರ್ಥಿಕ ತಲ್ಲಣಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.