ADVERTISEMENT

ವಿತ್ತೀಯ ನಿರ್ವಹಣೆಗೆ ದೂರದೃಷ್ಟಿ ಅಗತ್ಯ: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಕೇಂದ್ರವಷ್ಟೇ ಅಲ್ಲ, ರಾಜ್ಯ ಸರ್ಕಾರಗಳೂ ದೂರದೃಷ್ಟಿಯ ವಿತ್ತೀಯ ಧೋರಣೆ ಅನುಸರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದೆ.

ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಣ ಮತ್ತು ಹಣಕಾಸು ವಹಿವಾಟು ಕುರಿತ 14ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಆರ್‌ಬಿಐ ಉಪ ಗವರ್ನರ್ ಸುಬೀರ್ ಗೋಕರ್ಣ, ನಿಯಮ ಆಧಾರಿತ ವಿಧಾನ  ಅನುಸರಿಸುವ ಕ್ರಮಕ್ಕೆ ಮರಳುವ ವಿಚಾರದಲ್ಲಿ ಸರ್ಕಾರಗಳು ಬದ್ಧತೆ ತೋರಬೇಕಾಗಿರುವುದನ್ನು ಈ ವರ್ಷದ ಮುಂಗಡಪತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಈ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೂ, `ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದಲ್ಲಿನ ವಿತ್ತೀಯ ಕೊರತೆ ಯನ್ನು ಶೇ 5.9ರಿಂದ ಶೇ 5.1ಕ್ಕೆ ತಗ್ಗಿಸುವ ಅಗತ್ಯವಿದೆ~ ಎಂದಿರುವುದನ್ನು ಇಲ್ಲಿ  ಉಲ್ಲೇಖಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.