ADVERTISEMENT

Union Budget 2023: ಮೋದಿಗೆ ಅಮೃತ ಕಾಲ, ಜನಸಾಮಾನ್ಯರಿಗೆ ಅಲ್ಲ: ಎಎಪಿ ವ್ಯಂಗ್ಯ

ಪಿಟಿಐ
Published 1 ಫೆಬ್ರುವರಿ 2023, 11:32 IST
Last Updated 1 ಫೆಬ್ರುವರಿ 2023, 11:32 IST
ಎಎಪಿ 
ಎಎಪಿ    

ನವದೆಹಲಿ: 2014 ರಿಂದ ತಲಾ ಆದಾಯ ದ್ವಿಗುಣಗೊಂಡಿದೆ ಎಂದು ಹೇಳಿಕೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಪ‍್ರಶ್ನಿಸಿರುವ ಆಮ್ ಆದ್ಮಿ ಪಕ್ಷ, ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೃತ ಕಾಲ ಆಗಿದೆ, ದೇಶದ ಸಾಮಾನ್ಯ ಜನರಿಗೆ ಅಲ್ಲ ಎಂದು ಹೇಳಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಹೆಚ್ಚಾಗಲಿಲ್ಲ ಅಥವಾ ಯುವಕರಿಗೆ ಉದ್ಯೋಗ ಸಿಗಲಿಲ್ಲ. ಆದರೆ, ಇದು ಮೋದಿ ಅವರಿಗೆ ಅಮೃತ ಕಾಲ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸರಣಿ ಟ್ವೀಟ್‌ ಮಾಡಿದ್ದಾರೆ.

ದೇಶದ ರೈತರು, ಸೈನಿಕರು ಮತ್ತು ಯುವಕರಿಗೆ ಯಾವುದೇ ಅವಕಾಶಗಳಿಲ್ಲ ಎಂದು ಟೀಕಿಸಿದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.