ADVERTISEMENT

ಕೇಂದ್ರ ಬಜೆಟ್‌ 2020 | ರೈತ ಮಹಿಳೆಗೆ ‘ಧಾನ್ಯಲಕ್ಷ್ಮಿ’

ಪಿಟಿಐ
Published 1 ಫೆಬ್ರುವರಿ 2020, 16:12 IST
Last Updated 1 ಫೆಬ್ರುವರಿ 2020, 16:12 IST
ರೈತ ಮಹಿಳೆ ಸಾಂದರ್ಭಿಕ ಚಿತ್ರ 
ರೈತ ಮಹಿಳೆ ಸಾಂದರ್ಭಿಕ ಚಿತ್ರ    

ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ರೈತ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಧಾನ್ಯಲಕ್ಷ್ಮಿ’ ಯೋಜನೆ ಜಾರಿ ಮಾಡಲಾಗುವುದು.

ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಈ ಯೋಜನೆಯಡಿ ಧನಸಹಾಯ ಮಾಡಲಾಗುವುದು. ‘ರೈತ ಮಹಿಳೆ ಧಾನ್ಯಲಕ್ಷ್ಮಿ ಇದ್ದಂತೆ. ಹಾಗಾಗಿ, ಯೋಜನೆಗೆ ಈ ಹೆಸರು ಇಡಲಾಗಿದೆ. ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆನಬಾರ್ಡ್ ಮತ್ತು ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು’ ಎಂದು ನಿರ್ಮಲಾ ಹೇಳಿದರು.

2022ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆರ್ಥಿಕ ಒಳಗೊಳ್ಳುವಿಕೆಯ ಮೂಲಕ ರೈತರ ಆದಾಯ ದ್ವಿಗುಣ ಸಾಧ್ಯ. ಇದರಲ್ಲಿ ರೈತ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಧಾನ್ಯಲಕ್ಷ್ಮಿ’ ಯೋಜನೆ ಜಾರಿಗೆ ತರಲಾಗುವುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.