
ಎರಡನೇ ಮತ್ತು ಮೂರನೇ ಹಂತದ ಮತ್ತು ಧಾರ್ಮಿಕ ಕೇಂದ್ರಗಳಿರುವ ನಗರ ಮತ್ತು ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಂಥ ನಗರಗಳ ಮೂಲಸೌಕರ್ಯ ಮತ್ತು ಆಧುನಿಕರಣದತ್ತ ಗಮನ ಹರಿಸಲಾಗುತ್ತದೆ. ನಗರದ ಅಭಿವೃದ್ಧಿಯ ವೇಗವರ್ಧಕಗಳಾಗಿರುವ ಆರ್ಥಿಕ ಪ್ರದೇಶಗಳಲ್ಲಿ(ಸಿಇಆರ್) ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು 5 ವರ್ಷಗಳಲ್ಲಿ ಪ್ರತಿ ಸಿಇಆರ್ಗೆ ₹5 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ.
ದೊಡ್ಡ ನಗರಗಳಲ್ಲಿ ಅಧಿಕ ಮೌಲ್ಯದ ಮುನ್ಸಿಪಲ್ ಬಾಂಡ್ಗಳ ಒದಗಿಸುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ₹1,000 ಕೋಟಿಗಿಂತ ಹೆಚ್ಚಿನ ಬಾಂಡ್ಗಳ ವಿತರಣೆಯ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಲ ಪಡೆಯುವುದರ ಮೇಲೆ ₹ 100 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ಹಂತದ ನಗರಗಳಿಗೆ ನೆರವು ನೀಡಲು ₹200 ಕೋಟಿವರೆಗಿನ ಮೌಲ್ಯದ ಬಾಂಡ್ಗಳಿಗೆ ಅಮೃತ ಯೋಜನೆಯಡಿ ನೀಡಲಾಗುವ ಪ್ರೋತ್ಸಾಹಧನವನ್ನು ಮುಂದುವರಿಸಲಾಗುವುದು ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.