ADVERTISEMENT

ಕೆಐಒಸಿಎಲ್‌ಗೆ ₹12 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST
ಎಂ.ವಿ. ಸುಬ್ಬರಾವ್‌
ಎಂ.ವಿ. ಸುಬ್ಬರಾವ್‌   

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (ಕೆಐಒಸಿಎಲ್‌) 2020-21ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ₹436.71 ಕೋಟಿ ಆದಾಯ ಗಳಿಸಿದೆ. ತೆರಿಗೆ ಸಹಿತ ₹18.97 ಕೋಟಿ ಮತ್ತು ತೆರಿಗೆ ನಂತರ ₹12.02 ಕೋಟಿ ಲಾಭ ಗಳಿಸಿದೆ.

ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ವಿಡಿಯೊ ಕಾನ್ಫೆರನ್ಸ್ ಮೂಲಕ ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ತ್ರೈಮಾಸಿಕ ಆರ್ಥಿಕ ಫಲಿತಾಂಶ ಘೋಷಿಸಲಾಗಿದೆ.

ಆಂತರಿಕ ಹಾಗೂ ವಿದೇಶಿ ಮಾರುಕಟ್ಟೆಗೆ ಅದಿರು ಉಂಡೆ ಮಾರಾಟವು 4.5 ಲಕ್ಷ ಟನ್‌ನಿಂದ 5.68 ಲಕ್ಷ ಟನ್‌ಗೆ ಏರಿಕೆಯಾಗಿದೆ. 5.21 ಲಕ್ಷ ಟನ್ ರಫ್ತು ಮಾಡಿದ್ದು, 0.47 ಲಕ್ಷ ಟನ್ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ.

ADVERTISEMENT

ಕೋವಿಡ್-19 ಸಂದರ್ಭದಲ್ಲಿ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಅದಿರು ಉಂಡೆ ಉತ್ಪಾದನೆ ಮತ್ತು ಖನಿಜ ಶೋಧನಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.