ನವದೆಹಲಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್ ಆರಂಭಿಸಲು ಅವಕಾಶ ಕೊಡಬಹುದು ಎಂದು ಆರ್ಬಿಐನ ಆಂತರಿಕ ಸಮಿತಿ ಮಾಡಿ ರುವ ಪ್ರಸ್ತಾವನೆಯು ‘ಒಳ್ಳೆಯದಾಗಿ ಕಾಣುತ್ತಿರುವ’, ಆದರೆ ‘ತಪ್ಪು ದಾರಿ ಯಲ್ಲಿ’ ಕರೆದೊಯ್ಯುವ ಕ್ರಮ ಎಂದು ವಿಶ್ವ ಬ್ಯಾಂಕ್ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಹೇಳಿದ್ದಾರೆ. ಈ ಕ್ರಮದಿಂದಾಗಿ ಮುಂದೆ ಹಣಕಾಸಿನ ಅಸ್ಥಿರತೆ ಮೂಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಯಶಸ್ವಿ ಅರ್ಥ ವ್ಯವಸ್ಥೆಗಳಲ್ಲಿ ಉದ್ಯಮಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಹಾಗೂ ಬ್ಯಾಂಕ್ಗಳ ನಡುವೆ ಸ್ಪಷ್ಟ ಗಡಿಗಳು ಇರುತ್ತವೆ. ಇದಕ್ಕೆ ಕಾರಣಗಳು ಇವೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.