ADVERTISEMENT

ಬೆಂಗಳೂರು: ಪಿಎಫ್‌ ಕ್ಷೇತ್ರೀಯ ಕಚೇರಿಗೆ ಉಸ್ತುವಾರಿ ಅಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:52 IST
Last Updated 11 ಏಪ್ರಿಲ್ 2025, 15:52 IST
ಬಾಲಕೃಷ್ಣ ನಾಯ್ಕ್‌
ಬಾಲಕೃಷ್ಣ ನಾಯ್ಕ್‌   

ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿರುವ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕ್ಷೇತ್ರೀಯ ಕಚೇರಿಯ ಉಸ್ತುವಾರಿ ಅಧಿಕಾರಿಯಾಗಿ ಬಾಲಕೃಷ್ಣ ನಾಯ್ಕ್‌ ಅವರನ್ನು ನಿಯೋಜಿಸಲಾಗಿದೆ.

ಪ್ರಾದೇಶಿಕ ಭವಿಷ್ಯ ನಿಧಿ ಸಂಘಟನೆಯ ಆಯುಕ್ತರಾಗಿರುವ (ಗ್ರೇಡ್‌–1) ಅವರಿಗೆ, ಈ  ಹೊಣೆ ನೀಡಲಾಗಿದೆ ಎಂದು ಕಚೇರಿ ತಿಳಿಸಿದೆ.

‘ಸಾರ್ವಜನಿಕರಿಗೆ ಸಕಾಲದಲ್ಲಿ ಗುಣಮಟ್ಟದ ಸೇವೆ ನೀಡುವುದು ನನ್ನ ಗುರಿಯಾಗಿದೆ. ಇಪಿಎಫ್‌ಒ ಉತ್ತಮವಾಗಿ ಕಾರ್ಯ ನಿರ್ವಹಿಸಲು ಚಂದಾದಾರರು ಮತ್ತು ಉದ್ಯೋಗದಾತ ಸಂಸ್ಥೆಗಳು ಸಹಕಾರ ನೀಡಬೇಕು’ ಎಂದು ಬಾಲಕೃಷ್ಣ ನಾಯ್ಕ್‌ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.