ಬೆಂಗಳೂರು: ಟಿವಿಎಸ್ ಮೋಟರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರು ‘ಎ ಸೈಲೆಂಟ್ ರೆವಲ್ಯೂಷನ್ – ದಿ ಜರ್ನಿ ಆಫ್ ದಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್’ ಪುಸ್ತಕವನ್ನು ಸೆಪ್ಟೆಂಬರ್ 22ರಂದು ಬಿಡುಗಡೆ ಮಾಡಲಿದ್ದಾರೆ. ಟಿವಿಎಸ್ ಕಂಪನಿಯ ಸಮಾಜ ಸೇವಾ ಅಂಗವಾಗಿರುವ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ನ 25 ವರ್ಷಗಳ ಪಯಣವನ್ನು ಈ ಪುಸ್ತಕವು ದಾಖಲಿಸಿದೆ.
ಹಾರ್ಪರ್ ಕಾಲಿನ್ಸ್ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದು, ಸ್ನಿಗ್ಧ ಪರುಪುಡಿ ಅವರು ಪುಸ್ತಕ ಬರೆದಿದ್ದಾರೆ. ‘ಟ್ರಸ್ಟ್ ಸ್ಥಾಪಿಸಿದಾಗ ನಮಗೆ ನಮ್ಮ ಸಾಮಾಜಿಕ ಕೆಲಸಗಳು ಯಾವ ರೂಪ ಪಡೆದುಕೊಳ್ಳುತ್ತವೆ ಎಂಬುದರ ಸ್ಪಷ್ಟತೆ ಇರಲಿಲ್ಲ. ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿಸಲು ಕೊಡುಗೆ ನೀಡಲು ಬಯಸಿದ್ದೆವು. ನಮ್ಮ ಕೆಲಸವು ಇತರರಿಗೆ ಪ್ರೇರಣೆ ಆಗುತ್ತದೆ ಎಂಬುದು ನನ್ನ ಆಶಯ’ ಎಂದು ವೇಣು ಶ್ರೀನಿವಾಸನ್ ಅವರು ಹೇಳಿದ್ದಾರೆ.
ಈ ಪುಸ್ತಕವು ಸೆಪ್ಟೆಂಬರ್ 20ರ ನಂತರ ಅಮೆಜಾನ್ನಲ್ಲಿ, ಕ್ರಾಸ್ವರ್ಡ್ ಹಾಗೂ ಸಪ್ನಾದಂತಹ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.