ಕೋಲ್ಕತ್ತ: ‘ದೇಶದ ಆರ್ಥಿಕತೆಯು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆಯಾದರೂ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಇಲ್ಲ’ ಎಂದು ನೀತಿ ಆಯೋಗದ ಗೌರವಾನ್ವಿತ ಸದಸ್ಯ ರಾಮ್ಗೋಪಾಲ್ ಅಗರ್ವಾಲ್ ತಿಳಿಸಿದ್ದಾರೆ.
ನೋಟುರದ್ದತಿ, ಜಿಎಸ್ಟಿ, ದಿವಾಳಿ ಕಾಯ್ದೆಯಂತಹ ಸುಧಾರಣೆಗಳು ಅಗತ್ಯವಾಗಿದ್ದವು. ಆದರೆ ಆತುರದಿಂದ ಜಾರಿಗೊಳಿಸಲಾಗಿದೆ. ಇವುಗಳು ಸಹ ಮಂದಗತಿಯ ಬೆಳವಣಿಗೆಗೆ ಕಾರಣಗಳಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಹೂಡಿಕೆ ಹೆಚ್ಚಿಸಲು ಹಣಕಾಸು ನಿಯಮಗಳನ್ನು ಸಡಿಲಿಸಬೇಕಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.